ಯೋಜನೆಗಳು:

  ಒಳಾಂಗಣ ರಂಗಮಂದಿರ: ಮಳೆಗಾಲದಲ್ಲಿ ಬಯಲಿನಲ್ಲಿ ನಾಟಕ ಮಾಡಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಕನಿಷ್ಠ 1000 ಜನರು
     ಕೂರುವಂತಹ ಸುಸಜ್ಜಿತ ಒಳಾಂಗಣ ರಂಗಮಂದಿರ ನಿರ್ಮಾಣ ಮಾಡುವುದು..
  ಪ್ರಾರ್ಥನಾ ಮಂದಿರ: ಒಂದು ಸಾವಿರ ಜನರು ಕುಳಿತು ನಿತ್ಯ ಪ್ರಾರ್ಥನೆ ಮಾಡಲು ಅನುಕೂಲವಾಗುವಂತಹ ಅಪರೂಪದ ಪ್ರಾರ್ಥನಾ
     ಮಂದಿರದ ನಿರ್ಮಾಣ.
  ಗ್ರಾಮೀಣ ರಂಗಭೂಮಿಗೆ ಸಹಾಯ: ಹಳ್ಳಿಗಳಲ್ಲಿ ಹಿಂದಿನಿಂದಲೂ ನಾಟಕಗಳನ್ನು ಆಡುವ ಪದ್ಧತಿ ಇತ್ತು. ಇತ್ತೀಚೆಗೆ ಅದು ನಶಿಸುತ್ತಲಿದೆ.
     ಈಗ ಮತ್ತೆ ಪುನಶ್ಚೇತನಗೊಳಿಸುವ ಕಾರ್ಯ ಮಾಡಬೇಕಾಗಿದೆ. ಅದಕ್ಕಾಗಿ ಅವರಿಗೆ ನಿರ್ದೇಶಕರನ್ನು ಕಳಿಸುವುದು, ನಾಟಕದ ದಿನ ನೆರಳು
     ಬೆಳಕಿನ ವ್ಯವಸ್ಥೆ ಮಾಡುವುದು, ಧ್ವನಿವರ್ಧಕ ಒದಗಿಸುವುದು ಇತ್ಯಾದ ಕೆಲಸ ಆಗಬೇಕಾಗಿದೆ.
  ಅತಿಥಿ ಗೃಹ : ಸಾಣೇಹಳ್ಳಿಗೆ ಭೇಟಿ ಕೊಡುವ ಅತಿಥಿಗಳ ಸಂಖ್ಯೆ ಬೆಳೆಯುತ್ತಲಿದ್ದು ಅವರ ವಸತಿಯ ಸೌಲಭ್ಯಕ್ಕಾಗಿ ವಿಶೇಷ ರೀತಿಯ
      ಅತಿಥಿಗೃಹದ ನಿರ್ಮಾಣ.
  ಕಲಾವಿದರ ದತ್ತು ತೆಗೆದುಕೊಳ್ಳುವಿಕೆ: ಪ್ರತಿವರ್ಷ ಶಿವಸಂಚಾರಕ್ಕೆ ಬರುವ ಕಲಾವಿದರಿಗೆ ನಾವು ಕೊಡುತ್ತಿರುವ ಮಾಸಿಕ ಗೌರವ ಧನ
      ತುಂಬಾ ಕಡಿಮೆ. ಹಾಗಾಗಿ ಒಬ್ಬೊಬ್ಬ ಕಲಾವಿದರನ್ನು ಒಂದು ವರ್ಷದ ವರೆಗೆ ದತ್ತು ತೆಗೆದುಕೊಂಡು ಅವರಿಗೆ ಮಾಸಿಕ ಕನಿಷ್ಠ 6000
      ಹಣ ಕೊಡುವ ವ್ಯವಸ್ಥೆ ಮಾಡುವ ಆಶಯ.
 ಹೊಸ ವಾಹನ: ಶಿವಸಂಚಾರದ ಕಲಾವಿದರ ಪ್ರಯಾಣಕ್ಕಾಗಿ ಸುಸಜ್ಜಿತವಾದ ಇನ್ನೊಂದು ಬಸ್‌ನ ತರುವುದು.
  ರಂಗಶಿಬಿರಗಳು: ವರ್ಷದಲ್ಲಿ ನಾಲ್ಕಾರು ಕಡೆ ಮಕ್ಕಳ ಹಾಗೂ ಗ್ರಾಮೀಣರ ರಂಗತರಬೇತಿ ಶಿಬಿರ ನಡೆಸುವುದು.

ದಾನಿಗಳಲ್ಲಿ ಮನವಿ:
ಮೇಲ್ಕಂಡ ಕೆಲಸ ಕಾರ್ಯಗಳ ಹಿನ್ನೆಲೆಯಲ್ಲಿ ಕೋಟಿಗಟ್ಟಲೆ ಹಣ ಬೇಕಾಗುವುದು. 'ಕೊಟ್ಟದ್ದು ತನಗೆ, ಬಚ್ಚಿಟ್ಟದ್ದು ಪರರಿಗೆ. ಕೊಟ್ಟು ಕೆಟ್ಟಿತೆನಬೇಡ. ಮುಂದೆ ಕಟ್ಟಿಹುದು ಬುತ್ತಿ' ಎನ್ನುವ ಸರ್ವಜ್ಞನ ಆಶಯಕ್ಕನುಗುಣವಾಗಿ ಇಂಥ ಸತ್ಕಾರ್ಯಗಳಿಗೆ ಹಣವುಳ್ಳ ಧನಿಕರು, ಸಾರ್ವಜನಿಕರು ಹೆಚ್ಚಿನ ಧನಸಹಾಯ ಮಾಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ. ಚೆಕ್, ಡಿಡಿ ಅಥವಾ ನಗದಾಗಿ ಕೊಡಬಹುದು.


ಸಾಣೇಹಳ್ಳಿಯಲ್ಲಿರುವ ವಿವಿಧ ಸೇವಾಸಂಸ್ಥೆಗಳು ಸಾಣೇಹಳ್ಳಿಯಲ್ಲಿರುವ ವಿವಿಧ ಸೇವಾಸಂಸ್ಥೆಗಳು ಸಾಣೇಹಳ್ಳಿಯಲ್ಲಿರುವ ವಿವಿಧ ಸೇವಾಸಂಸ್ಥೆಗಳು ಸಾಣೇಹಳ್ಳಿಯಲ್ಲಿರುವ ವಿವಿಧ ಸೇವಾಸಂಸ್ಥೆಗಳು ಸಾಣೇಹಳ್ಳಿಯಲ್ಲಿರುವ ವಿವಿಧ ಸೇವಾಸಂಸ್ಥೆಗಳು ಸಾಣೇಹಳ್ಳಿಯಲ್ಲಿರುವ ವಿವಿಧ ಸೇವಾಸಂಸ್ಥೆಗಳು




ಕಾರ್ಯದರ್ಶಿ,
ಶ್ರೀ ಶಿವಕುಮಾರ ಕಲಾಸಂಘ,
ಸಾಣೇಹಳ್ಳಿ-೫೭೭ ೫೧೫,
ಹೊಸದುರ್ಗ-ತಾ, ಚಿತ್ರದುರ್ಗ-ಜಿ,
ಫೋನ್ ನಂ : 08199-243772
ರಂಗಶಾಲೆ ನಂ: 9448393081
ಮೊಬೈಲ್ ನಂ : 9449649850
ಇ-ಮೇಲ್ : info@shivasanchara.org
ವೆಬ್‌ಸೈಟ್: www.shivasanchara.org

ಈ ವಿಳಾಸಕ್ಕೆ ಹಣ ಕಳಿಸಬಹುದು.







ಸಾಣೇಹಳ್ಳಿಯ ಪರಿಚಯ

ಸುಮಾರು 400 ಮನೆಗಳ ಪುಟ್ಟ ಗ್ರಾಮ. ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿಗೆ ಸೇರಿದೆ. ಇಲ್ಲಿ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಶಾಖಾ ಮಠವಿದೆ. ಹೊಸದುರ್ಗದಿಂದ ತರಿಕೆರೆಗೆ ಹೋಗುವ ರಸ್ತೆಯಲ್ಲಿ 16 ಕಿ ಮೀ ಕ್ರಮಿಸಿದರೆ ಬಲಕ್ಕೆ 'ಶರಣರ ಬರವೆಮಗೆ ಪ್ರಾಣ ಜೀವಾಳವಯ್ಯ'ಎಂಬ ಮಹಾದ್ವಾರ ಸರ್ವರನ್ನೂ ಸ್ವಾಗತಿಸುವುದು.

ನಮ್ಮ ವಿಳಾಸ

ಶ್ರೀ ಶಿವಕುಮಾರ ಕಲಾಸಂಘ (ರಿ)
ಸಾಣೇಹಳ್ಳಿ-577 515
ಹೊಸದುರ್ಗ-ತಾ, ಚಿತ್ರದುರ್ಗ-ಜಿ
ಕರ್ನಾಟಕ-ರಾಜ್ಯ, ಭಾರತ-ದೇಶ
ಫೋನ್ ನಂ : 918199243772
ಮೊಬೈಲ್ ನಂ : +91 9449649850
+91 9448393081

Designed by EXONICS